ಸಾವು

ಪ್ರಾಣ ಇದ್ದವು
ಅದನ್ನು
ಕಳೆದುಕೊಂಡಾಗ
ಸಂಭವಿಸುವುದು
ಸಾವು.
ಸೂಕ್ಷ್ಮಾತಿ ಸೂಕ್ಷ್ಮಜೀವಿ,
ಜಲಚರ, ಪಶು, ಪಕ್ಷಿ
ಸಕಲ ಸಸ್ಯ, ವೃಕ್ಷ
ದೈತ್ಯ ಕಾಯ ಎಲ್ಲಕೂ
ನಿಶ್ಚಿತ.. ಸಾವು.
‘ಜಾತಸ್ಯ ಮರಣಂ ಧೃವಂ’.

ಮಾನವನ ಮಾತೇ ಬೇರೆ.
ಅವನ ಅಂತ್ಯಕ್ಕೆ
ಬರಬೇಕಿಲ್ಲ ಮರಣ.
ಸ್ವಲ್ಪವೂ ಇಲ್ಲದಾಗ ಹಣ
ಆಸ್ತಿಪಾಸ್ತಿಯ ಜೊತೆಗೆ
ಮಾನ ಮರ್ಯಾದೆ
ಎಲ್ಲವೂ ಹರಾಜಾದಾಗ
ಸುಖದ ಸೌಧ ಕುಸಿದಾಗ
ಬಂತವನ ‘ಆರ್ಥಿಕ ಮರಣ’.
ಅವನಾಗ ಸಜೀವ ಶವ!

ಮಾನ ಉಳ್ಳವ ‘ಮಾನವ’
ಹೋದರವನ ಮಾನ
ಬಂತವನ ಮರಣ.

ಪರಸ್ಪರ ದ್ವೇಷ-ಅಸೂಯೆ
ಶೀತಲ ಯುದ್ಧ,
ಹೊಲಸು ರಾಜಕೀಯ –
ವಿಷ ವರ್ತುಲದಲ್ಲಿ
ಸಿಲುಕಿ, ತೇಜೋವಧೆ
ಗೊಂಡವನ ಸ್ಥಿತಿ
“ಬೌದ್ಧಿಕ ಮರಣ”.
ತಲೆ ಕೆಟ್ಟು, ಕಳೆದು
ಚಿತ್ತ ಸ್ವಾಸ್ಥ್ಯ
ಹುಚ್ಚು ಹಿಡಿದು
ನಗ್ನನಾಗಿ ಸುತ್ತಿ ಅಲೆದು
ಯಾರಿಗೂ ಬೇಡವಾಗಿ
ಅರ್ಥವಿಲ್ಲದ ರಾಶಿ ಕಸ ಹೊತ್ತು
ಕಿರುಚಿ, ಕುಣಿದು, ನಕ್ಕು, ಅತ್ತು
ರಸ್ತೆಯ ಮೇಲೆ ಬಿದ್ದು
ಹೊರಳಿ, ಹೊರಳಿ, ಸಾಯಲಾರದೆ
ಕರ್ಮ ಕಳೆಯಲಾಗದೆ
ಕ್ರಿಮಿಯ ಬಾಳು ನಡೆಸಿ
‘ಜೀವನ್ಮರಣ’ ಪಡೆದವಗೆ
ಸಾವು…ಮೋಕ್ಷ.
ಸತ್ತು ಬದುಕಿದ!
*****
೧೪-೦೬-೧೯೯೨

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕವಿಗಳ ಕವಿ ಎಜ್ರಾ ಪೌಂಡ್
Next post ದೀಪ

ಸಣ್ಣ ಕತೆ

  • ಸ್ವಯಂಪ್ರಕಾಶ

    ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

  • ಆವರ್ತನೆ

    ಒಬ್ಬ ಸಾಹಿತಿಯನ್ನು ನೋಡುವ ಕುತೂಹಲ ಯಾರಿಗಿಲ್ಲ? ಪಕ್ಕದೂರಿನ ಹೈಸ್ಕೂಲಿನಲ್ಲಿ ಕಾದಂಬರಿಕಾರ ಅ.ರ.ಸು.ರವರ ಕಾರ್ಯಕ್ರಮವಿದೆಯೆಂಬ ಸುದ್ದಿ ಕೇಳಿ ನಾವು ನೋಡಲು ಹೋದೆವು. ಅ.ರ.ಸು.ರವರ ಕೃತಿಗಳನ್ನು ನಾವಾರೂ ಹೆಚ್ಚಾಗಿ ಓದಿರಲಾರೆವು.… Read more…

  • ಒಂಟಿ ತೆಪ್ಪ

    ನಮ್ಮ ಕಂಪೆನಿಗೆ ಹೊಸದಾಗಿ ಕೆಲಸಕ್ಕೆ ಸೇರಿದ ಕ್ಲೇರಾಳ ಬಗ್ಗೆ ನಾನು ತಿಳಿದುಕೊಳ್ಳಲು ಪ್ರಯತ್ನಿಸಿದಷ್ಟೂ ಅವಳು ನಿಗೂಢವಾಗುತ್ತಿದ್ದಳು. ನಾಲಗೆಯ ಚಪಲದಿಂದ ಸಹ-ಉದ್ಯೋಗಿಗಳು ಅವಳ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿದರೂ… Read more…

  • ಮಾದಿತನ

    ಮುಂಗೋಳಿ... ಕೂಗಿದ್ದೆ ತಡ, ಪೆರ್‍ಲಜ್ಜ ದಿಡಿಗ್ಗನೆದ್ದ. ರಾತ್ರಿಯೆಲ್ಲ... ವಂದೇ ಸಮ್ನೆ ಅಳುತ್ತಾ, ವುರೀಲೋ... ಬ್ಯಾಡೋ... ಯಂಬಂತೆ, ದೀಪದ ಬುಡ್ಡಿ, ನಡ್ಮುನೆ ಕಂಬ್ಕಂಟಿ, ಸಣ್ಗೆ ವುರಿತಿತ್ತು. ಯದೆವಳ್ಗೆ ಮಜ್ಗೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

cheap jordans|wholesale air max|wholesale jordans|wholesale jewelry|wholesale jerseys